ಅಂತರರಾಷ್ಟ್ರೀಯ ಕಾಫಿ ದಿನದ ಪ್ರಯುಕ್ತ, ದಿನಾಂಕ 1-10-2025 ಬುಧವಾರ ಕೊಪ್ಪದ ಎ.ಎಲ್.ಎನ್.ರಾವ್ ಮೆಮೋರಿಯಲ್ ಆಯುರ್ವೇದ ವೈದ್ಯಕೀಯ ಕಾಲೇಜು, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾ & ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಕಾಫಿಯ ಬಹು ಆಯಾಮದ ಉಪಯುಕ್ತತೆಗಳು ಮತ್ತು ಕಾಫಿಯೊಂದಿಗೆ ವ್ಯವಹಾರಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಉಪಾಸಿ ಸದಸ್ಯರಾದ ಕೊಪ್ಪದ ಪ್ರಮುಖ ಕಾಫಿಬೆಳೆಗಾರರಾದ ಶ್ರೀ ಸಹದೇವ್ ಬಾಲಕೃಷ್ಣ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಸದಸ್ಯರಾದ ಶ್ರೀ ರಾಜಾರಾಮ್,ಶ್ರೀ ಆದಿತ್ಯ ರಾವ್, ಮತ್ತು ಎ.ಎಲ್.ಎನ್.ರಾವ್.ಕಾಲೇಜು ಟ್ರಸ್ಟಿ ನಮಿತಾ ರಾವ್ ಮತ್ತು ಅಭಿಜಿತ್ ರಾವ್ ಹಾಗೂ ಶ್ರೀ ಮತಿ ರಾಧಿಕಾ ಸಹದೇವ್ ಇವರನ್ನು ಸ್ವಾಗತಿಸಲಾಯಿತು, ಕಾಲೇಜು ಟ್ರಸ್ಟಿ ಮತ್ತು ಸ್ವತಃ ಕಾಫಿ ಉತ್ಸಾಹಿ ನಮಿತಾ ರಾವ್ ಅವರು ಕಾಫಿಗೆ ಸಂಬಂಧಿಸಿದ ವಿಭಿನ್ನ ಅಭಿರುಚಿಗಳು ಮತ್ತು ಅದರ ಪ್ರಕಾರಗಳಿಗೆ ಸಂಬಂಧಿಸಿದ ಉತ್ತಮ ಸಂವಾದವನ್ನು ನಡೆಸಿದರು, ಮುಖ್ಯ ಅತಿಥಿಗಳು ಕಾಫಿ ವ್ಯವಹಾರದ ಪ್ರಸ್ತುತ ಸನ್ನಿವೇಶ ಮತ್ತು ಅನ್ವೇಷಿಸಬೇಕಾದ ಕಾಫಿಯ ವಿವಿಧ ಕ್ಷೇತ್ರಗಳ ಬಗ್ಗೆ ಮಾತನಾಡಿದರು. ಮತ್ತೊಬ್ಬ ಅತಿಥಿ ಶ್ರೀ ಆದಿತ್ಯ ರಾವ್ ಕಾಫಿ ತಿರಮಿಸು ಮತ್ತು ಕಾಫಿ ಮೂಸ್ನ ಸುಲಭ ತಯಾರಿಕೆಯನ್ನು ಪ್ರದರ್ಶಿಸಿದರು, ಇದರಲ್ಲಿ ಭಾಗವಹಿಸಿದ ಎಲ್ಲರೂ ರುಚಿಯನ್ನು ಸವಿದು ಮೆಚ್ಚಿದರು. ಅಧ್ಯಕ್ಷೀಯ ಭಾಷಣವನ್ನು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಭಿಜೀತ್ ರಾವ್ ಮಾಡಿದರು, ನಂತರ ಅತಿಥಿಗಳಿಗೆ ಸನ್ಮಾನ, ಧನ್ಯವಾದ ಮತ್ತು ಚಹಾ ಪುರಸ್ಕಾರ ನಡೆಯಿತು. ಕೊಪ್ಪದ ಕಾಫಿ ಪ್ರಿಯರು, ಪ್ರಾಧ್ಯಾಪಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವರ್ಷದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾಫಿನಾಡಿನ ಸಂಜೆಯ ಈ ಕಾರ್ಯಕ್ರಮ ಕಾಫಿ ಪ್ರಿಯರಿಗೆ ಉಲ್ಲಾಸ ನೀಡಿತು.
ಚಿಕ್ಕಮಗಳೊರು
ಕೊಪ್ಪ
ಜಯಪುರ
Sringeri
ಕುದುರೆಗುಂಡಿ
ತೀರ್ಥಹಳ್ಳಿ
ಬಾಳೆಹೊನ್ನೂರು
ಹರಿಹರಪುರ
ಅಂತರಾಷ್ಟ್ರೀಯ ಕಾಫಿದಿನ ಎ.ಎಲ್.ಎನ್.ರಾವ್. ಕಾಲೇಜಿನಲ್ಲಿ.
ಅಂತರರಾಷ್ಟ್ರೀಯ ಕಾಫಿ ದಿನದ ಪ್ರಯುಕ್ತ, ದಿನಾಂಕ 1-10-2025 ಬುಧವಾರ ಕೊಪ್ಪದ ಎ.ಎಲ್.ಎನ್.ರಾವ್ ಮೆಮೋರಿಯಲ್ ಆಯುರ್ವೇದ ವೈದ್ಯಕೀಯ ಕಾಲೇಜು, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾ & ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಕಾಫಿಯ ಬಹು ಆಯಾಮದ ಉಪಯುಕ್ತತೆಗಳು ಮತ್ತು ಕಾಫಿಯೊಂದಿಗೆ ವ್ಯವಹಾರಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು
ಹಿಂದಿನ ಸುದ್ದಿ
ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಉಚಿತ ನೇತ್ರ ತಪಾಸಣೆ
ಮುಂದಿನ ಸುದ್ದಿ
"ಕೊಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ ಬ್ರೇಕ್"
Share this article
ಈ ವಿಭಾಗದ ಸುದ್ದಿಗಳು
*ಬದಲಾಗುತ್ತಾ ಶೃಂಗೇರಿ ಚುನಾವಣಾ ಕ್ಷೇತ್ರದ ಚಿತ್ರಣ*
1 week ago
*ಶೃಂಗೇರಿ ಕ್ಷೇತ್ರ ಬಂದ್ ಗೆ ಕೊಪ್ಪದಲ್ಲಿ ಉತ್ತಮ ಬೆಂಬಲ*
2 months ago
*ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ*
3 months ago